ಕಣ್ಣು ಮುಚ್ಚಾಲೆ

ಎಷ್ಟೊತ್ತಿನ ವರೆಗೆ ನಿನ್ನ ಕಣ್ಣ ಮುಚ್ಚಾಲೆ
ನೀನು ಕಾಡಿದರೆ ನಾ ಸಹಿಸೆನು
ಎನ್ನ ಮನದ ಭಾವಗಳು ನಿನಗಾಗಿ ಸೋತಿವೆ
ನಿನ್ನ ರೂಪಕಾಣದೆ ನಾ ತಾಳೆನು

ಏಸು ಮನುಜರಿದ್ದರೂ ನಾನು ತಬ್ಬಲಿ
ಪ್ರಪಂಚ ಇದು ಕಾಣದ ಹೆಬ್ಬುಲಿ
ಎದುರಾಳಿಯಂತೆ ನಿತ್ಯ ಹೋರಾಟವು
ನನ್ನ ಬದುಕು ಸಾಗಿದೆ ಇದೇ ಮಬ್ಬಲಿ

ನಿನ್ನ ತಾಣದಿ ಬಂದೆ ನಿನ್ನ ಮರೆತೆ
ಎದೆಯ ಕರೆಯನ್ನು ಕೇಳದೆ ಹೋದೆ
ತನುವಿನ ಹಮ್ಮಿನಲಿ ನಿತ್ಯ ಮರೆದೆ
ಇನ್ನು ತಾಳೆನು ನಾನು ಈ ಭವದ ಭಾದೆ

ನಿನ್ನ ನೆನಪೇ ಅಮೃತವು ಮರೆವೆ ವಿಷ
ಇಂದ್ರಿಯ ಭೋಗವೆಲ್ಲ ಬಿಸಿಲು ಗುದರೆ!
ನನ್ನ ಅಸಹಾಯಕತೆ ಹರಿಯೆ ಅರಿಯಲಾರೆಯಾ
ಮಾಣಿಕ್ಯ ವಿಠಲನ ಮೊರೆ ಕೇಳದಾದರೆ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೊಯ್ಯದಿರು ಮನವೇ
Next post ಆದಿಮಾನವ ಭೋಗಮಾನವನಾದ ಕಥೆ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys